ಹೊಸ್ತೋಟ,ಶಿಮಂತೂರುಗೆ ದೇರಾಜೆ ಸ್ಮತಿ ಗೌರವ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜುಲೈ 24 , 2015
|
ಜುಲೈ 24, 2015
|
ಹೊಸ್ತೋಟ,ಶಿಮಂತೂರುಗೆ ದೇರಾಜೆ ಸ್ಮತಿ ಗೌರವ
ಉಡುಪಿ :
ಹೊಸ್ತೋಟ ಮಂಜುನಾಥ ಭಾಗವತರು ಮತ್ತು ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ದೇರಾಜೆ ಸ್ಮತಿ ಗೌರವ ನೀಡಲು ದೇರಾಜೆ ಸೀತಾರಾಮಯ್ಯ ಸಾಂಸ್ಕತಿಕ ಪ್ರತಿಷ್ಠಾನ, ದೇರಾಜೆ ಶತಮಾನೋತ್ಸವ ಸಮಿತಿ ಮತ್ತು ಕರ್ನಾಟಕ ಸಾಂಸ್ಕತಿಕ ಕಲಾ ಪ್ರತಿಷ್ಠಾನ, ಉಡುಪಿ ಯಕ್ಷಗಾನ ಕಲಾರಂಗ ನಿರ್ಧರಿಸಿದೆ.
ಆ.2ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗೌರವ ಪ್ರದಾನ ನಡೆಯಲಿದೆ. ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಕ್ಷೇತ್ರದ ಸರ್ವ ಅಂಗಗಳಲ್ಲೂ ಪರಿಣತಿಯನ್ನು ಪಡೆದು ,ಪರಂಪರೆಯ ಚೌಕಟ್ಟಿನಲ್ಲಿ, ಹೊಸತನ್ನು ಸಷ್ಟಿಸಿ, ಯಕ್ಷಗಾನ ಭಾಗವತರಾಗಿ ನಾಟ್ಯಾಚಾರ್ಯರಾಗಿ , ಅನೇಕ ಶಿಷ್ಯರನ್ನು ಸಿದ್ದಗೊಳಿಸಿದದವರು.
ಡಾ.ಶಿಮಂತೂರು ನಾರಾಯಣ ಶೆಟ್ಟಿಯವರು ಹಳೆಗನ್ನಡ ಸಾಹಿತ್ಯವನ್ನೂ ಅಧ್ಯಯನ ಮಾಡಿ, ಯಕ್ಷಗಾನ ಕಲೆಯನ್ನೂ ,ಪ್ರಸಂಗ ಸಾಹಿತ್ಯವನ್ನು ಅಭ್ಯಸಿಸಿ, ನಿರಂತರ ಸಂಶೋಧನೆಯಲ್ಲಿ ನಿರತರಾದವರು. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಅನೇಕ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು. ದೇರಾಜೆ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ದೇರಾಜೆ ಶತಮಾನೋತ್ಸವ ಮತ್ತು ಸಂಸ್ಮರಣೆ ನಡೆಯಲಿದೆ. ಲಕ್ಷ್ಮೀಶ ತೋಳ್ಪಾಡಿ ದೇರಾಜೆ ಸಂಸ್ಮರಣೆ ಮಾಡಲಿದ್ದಾರೆ. ಡಾ.ಎಂ ಪ್ರಭಾಕರ ಜೋಶಿ ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ದೇರಾಜೆ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ, ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷ ಆನೆಕಾರ ಗಣಪಯ್ಯ, ದೇರಾಜೆ ಸೀತಾರಾಮಯ್ಯ ಸಾಂಸ್ಕತಿಕ ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಶಂಕರ್, ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ಬೆಂಗಳೂರಿನ ಕರ್ನಾಟಕ ಸಾಂಸ್ಕತಿಕ ಕಲಾ ಪ್ರತಿಷ್ಠಾನ ಅಧ್ಯಕ್ಷ ಎಸ್.ಎನ್. ಪಂಜಾಜೆ ಉಪಸ್ಥಿತರಿರುವರು. ಮಂಟಪ ಪ್ರಭಾಕರ ಉಪಾಧ್ಯ ಮತ್ತು ಎ.ಪಿ. ಪಾಠಕ್ ಅವರ ವಿನ್ಯಾಸದಲ್ಲಿ ದಿವಾಕರ ಹೆಗ್ಡೆ ಧಾರವಾಡ ಇವರ ಮೋಹ ಮೇನಕೆ ಯಕ್ಷಗಾನವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೃಪೆ :
vijaykarnataka
|
|
|